ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಕಾರು - ಕಾರಿನಲ್ಲಿದ್ದವರು ಪಾರು..! Car

ನಡು ರಸ್ತೆಯಲ್ಲಿಯೇ ಹೊತ್ತಿ ಉರಿದ ಕಾರು - ಕಾರಿನಲ್ಲಿದ್ದವರು ಪಾರು..!


ಶಿವಮೊಗ್ಗ :  ಸಾಗರ ರಸ್ತೆಯಲ್ಲಿರುವ ಸಿಂಹಧಾಮದ ಬಳಿಯಲ್ಲಿ ಚಲಿಸುತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದವರು ಅವಘಡದಿಂದ ಪಾರಾಗಿದ್ದಾರೆ. ಕಾರು ನೋಡು ನೋಡತಿದ್ದಂತಲೇ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ.

ಮಲವಗೊಪ್ಪದ ನಿವಾಸಿ ವೀರೇಶ್ ಎಂಬುವರಿಗೆ ಸೇರಿದ
 l,20 ಕಾರು ಸಿಂಹಧಾಮದ ಬಳಿ ಬರುತ್ತಿದ್ದಂತೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಬ್ಯಾನೆಟ್ ತೆಗೆಯಲು ಸಾಧ್ಯವಾಗದಕಾರಣ ಬೆಂಕಿ ಕಾರನ್ನ ಸಂಪೂರ್ಣ ಆವರಿಸಿಕೊಂಡದೆ. 

ನಂತರ 112 ಸಹಾಯದಿಂದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಬೆಂಕಿ ಆರಿಸಲು ಸಹಾಯವಾಗಿದೆ. ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ನಿನ್ನೆ ರಾತ್ರಿ  ಸಂಭವಿಸಿದೆ.



Previous Post Next Post