ನೆರಟೂರು ಗ್ರಾಮ ಪಂ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶ*ವ ಪತ್ತೆ! tth

ನೆರಟೂರು ಗ್ರಾಮ ಪಂ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶ*ವ ಪತ್ತೆ! 
ತೀರ್ಥಹಳ್ಳಿ : ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುರಾನಿ ಕಾಡಿನಲ್ಲಿ ಕೊಳೆತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಇದು ಸುಮಾರು 3 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಸ್ಥಳೀಯರಿಂದ ಲಭ್ಯವಾಗಿದೆ. 

ಮೃತಪಟ್ಟ ವ್ಯಕ್ತಿಯನ್ನು ಸುಧೀರ (40) ಎಂದು ಗುರುತಿಸಲಾಗಿದ್ದುಇವರು ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಸಮೀಪದ ಕೋಮನೆಯವರು ಎಂದು ತಿಳಿದು ಬಂದಿದೆ. ಹೆಂಡತಿ ಮನೆ ನೆರಟೂರು ಆಗಿದ್ದು ಅಲ್ಲಿ ಮನನೊಂದ ಸುಧೀರ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಶವವು ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.


Previous Post Next Post