ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಶಾಲಾ ವಿದ್ಯಾರ್ಥಿಗಳು
ತೀರ್ಥಹಳ್ಳಿ : ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಸವಾನಿಯಲ್ಲಿ ಜರುಗಿತ್ತು. ಶಾಲೆಯಿಂದ ಭಾಗವಹಿಸಿದ ಸ್ಪರ್ಧಿಗಳಲ್ಲಿ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಗರಿಮೆ ಮೂಡಿಸಿರುತ್ತಾರೆ.
ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ವಾಗ್ದೇವಿ ಬಳಗ ಅಭಿನಂದಿಸಿ ಜಿಲ್ಲಾಮಟ್ಟದ ಸ್ಪರ್ಧೆಗಳಿಗೆ ಶುಭ ಹಾರೈಸಿರುತ್ತಾರೆ.
ವಿಜೇತ ವಿದ್ಯಾರ್ಥಿಗಳ ವಿವರ
* ಆಯುಷ್ ಹೆಚ್ ವೈ : ಆಶು ಭಾಷಣ - ಪ್ರಥಮ
* ಅಮೂಲ್ಯ ಜಿ ಎಚ್ : ಚಿತ್ರಕಲೆ - ಪ್ರಥಮ
* ಕೃತಿಕಾ ಎಂ ಎ : ಭಕ್ತಿಗೀತೆ - ಪ್ರಥಮ
* ಆಯುಷ್ ಹೆಚ್ ವೈ : ಕನ್ನಡ ಕಂಠಪಾಠ - ದ್ವಿತೀಯ
* ಸುದೀಪ್ತಿ : ಕನ್ನಡ ಕವನ ವಾಚನ - ತೃತೀಯ
Tags:
ವಾಗ್ದೇವಿ ಸಂಸ್ಥೆ