ಹಸುವಿನ ಕೆಚ್ಚಲು ಕೊ*ಯ್ದ ದುಷ್ಕರ್ಮಿಗಳು - ಮಲೆನಾಡಿನಲ್ಲೊಂದು ಹೇಯ ಕೃತ್ಯ..! Hosanagara

ಹಸುವಿನ ಕೆಚ್ಚಲು ಕೊ*ಯ್ದ ದುಷ್ಕರ್ಮಿಗಳು - ಮಲೆನಾಡಿನಲ್ಲೊಂದು ಹೇಯ ಕೃತ್ಯ..!
ಹೊಸನಗರ: ಹಸುವಿನ ಕೆಚ್ಚಲು ಕೊ*ಯ್ದ ಹೇಯ ಘಟನೆಯೊಂದು ಮಲೆನಾಡಿನ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ.

ವಿಜಾಪುರ ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿರುವ ಹಸು ಶನಿವಾರ ಮೇಯಲು ಹೋದ ವೇಳೆ ದುಷ್ಕರ್ಮಿಗಳು ಕೆಚ್ಚಲು‌ ಕೊ*ಯ್ದಿದ್ದಾರೆ.  ಸ್ಥಳೀಯರು ಇದನ್ನು ನೋಡಿ ಮನೆಯವರಿಗೆ  ಮಾಹಿತಿ ನೀಡಿದ ನಂತರ ಸ್ಥಳೀಯರ ಸಹಕಾರದಿಂದ ಹಸುವನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.

ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Previous Post Next Post