ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನಾಧಿಕಾರಿ ಮಂಜುನಾಥ್ ಪುತ್ರಿ ಪ್ರೇಕ್ಷಾ ಎಸ್ಎಸ್ಎಲ್'ಸಿಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್
ತೀರ್ಥಹಳ್ಳಿ: ಪಟ್ಟಣದ ಪ್ರತಿಷ್ಠಿತ ವಾಗ್ದೇವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪ್ರೇಕ್ಷಾ ಎಸ್ಎಸ್ಎಲ್'ಸಿಯಲ್ಲಿ 625ಕ್ಕೆ 623 ಅಂಕ ಗಳಿಸಿ ತಾಲೂಕಿಗೆ ಹಾಗೂ ವಿದ್ಯಾಸಂಸ್ಥೆಗೆ ಕೀರ್ತಿ ತಂದಿರುತ್ತಾಳೆ.
ಪ್ರೇಕ್ಷಾ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2ನೇ ಕಛೇರಿಯ ಯೋಜನಾಧಿಕಾರಿ (ಇತ್ತಿಚೆಗೆ ಯಾದಗಿರಿ ಜಿಲ್ಲೆಗೆ ವರ್ಗವಾಗಿರುವ) ಮಂಜುನಾಥ್ ಹಾಗೂ ರಾಗಿಣಿಯವರ ಪುತ್ರಿಯಾಗಿದ್ದು) ಪ್ರೇಕ್ಷಾ ರವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ತೀರ್ಥಹಳ್ಳಿ 1ನೇ ಕಛೇರಿಯ ಯೋಜನಾಧಿಕಾರಿ (ಇತ್ತಿಚಿಗೆ ನರಗುಂದ ಯೋಜನಾ ಕಛೇರಿಗೆ ವರ್ಗವಾಗಿರುವ) ಮಾಲತಿ ದಿನೇಶ್ ರವರು ಯೋಜನೆಯ ಪರವಾಗಿ ಗೌರವಿಸಿ ಸನ್ಮಾನಿಸಿ ಅಭಿನಂದಿಸಿದರು.
Tags:
ಎಸ್ ಎಸ್ ಎಲ್ ಸಿ
